ಸ್ಪರ್ಶ

ರಾತ್ರಿ ಕತ್ತಲೆಮನೆ ನೋವಲ್ಲಿ
ಕನಸುಗಳು ಅಡರಿಸಿ ಬೆಳಂ
ಬೆಳಕಿನ ಸೂರ್ಯನಿಗೆ ನೂರು
ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ
ಬೆತ್ತಲ ಬದುಕು ಮತ್ತೆ ತಲ್ಲಣ
ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ.

ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ
ಜಗತ್ತು ನಾನು ನೀನು ಕವಿತೆ ಹೇಗೆ
ಮಿರುಗಿ ಕೊರಗಿ ಬಡಿದಾಡಿ ಹೂ ಬಳ್ಳಿ
ಚಿಗುರು ಹಮ್ಮುಬಿಮ್ಮು ಒಡಲಿಗೆ
ಹಸಿಯನ್ನು ಸುರಿಯುತ್ತವೆ ಮತ್ತೆ
ಅದ್ಭುತ ಜೀವಗಳು ಚಿಗುರುತ್ತವೆ.

ಹೀಗೆ ಚಿಗುರು ಚಿಮ್ಮಿ ವಿಸ್ಮಯ
ವಿನೀತಗೊಂಡ ಕವಿತೆಗಳು ಮಂಪರು
ಹರವಿಕೊಂಡು ಬಾಚಿತಬ್ಬುವ ತಳಮಳ
ಹನಿಗಳು ಮುತ್ತಾಗಿ ಒಡಲ ಕಡಲ
ಸೇರಿ ನಿರಂತರ ಅಲೆಗಳ ನದಿಯ ಮೌನ
ಧ್ಯಾನಿಸುತ ಮಳೆ ಮೋಡ ಬೀಜ ಕಟ್ಟುತ್ತವೆ.

ದೀರ್ಘಕಾಲ ಅರಳಿ ಬಂದ ಪ್ರೀತಿ
ಮಳೆ ಹುಡುಕಾಟ ಲೋಕ ದಾಸೋಹ
ಮನೆ ಅಂಗಳದಲ್ಲಿ ಆಕಾಶ ಬುಟ್ಟಿ
ಬೊಗಸೆ ತುಂಬ ಹರಿದ ನೀರು
ಗೂಡು ಮಾಡಿದ ಜೀವ ಜಲ
ಹಣತೆಯ ತುಂಬ ಬೆಳಕಿನ ಹಕ್ಕಿ ಹಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಮ್ಮತ್ತು
Next post ನೆರಳು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys